Saturday, April 25, 2009

ಮಳೆ

ಬಾನಲ್ಲಿ ಗುಡುಗಿದನು ಮೇಘರಾಜ
ಭೂಮಿಯ ಜೊತೆ ಮಾತನಾಡಬಯಸಿ
ಹುಡುಗಾಟದ ಹುಡುಗಿಯವಳು ಮರುನುಡಿಯಲಿಲ್ಲ
ಕೇಳಲೇ ಇಲ್ಲವೆಂಬಂತೆ ನಟಿಸಿ

ಮಲಗಿರುವಳೇನೋ ಎಚ್ಚರಗೊಳಿಸೋಣವೆಂದು
ಕಳುಹಿಸಿದನವ ಮಿಂಚೆಂಬ ಬೆಳಕು
ಆದರೆ ಅದೂ ನೀಡಲಿಲ್ಲ
ಭೂಮಿಯ ನಟನೆಗೆ ಯಾವುದೇ ತೊಡಕು

ಗಾಢ ನಿದ್ರೆಯಿಂದ ಎಚ್ಚೆತ್ತುಕೊಳ್ಳಲಿ
ಎಂದು ಸುರಿಸಿದ ವರ್ಷಧಾರೆ
ಅದರಿಂದ ಪುಳಕಗೊಂಡು ಪರಿಮಳ ಸೂಸಿದರೂ
ಪ್ರತಿಕ್ರಿಯಿಸಲಿಲ್ಲ ಧರೆ

ಕುಪಿತನಾದ ಮೇಘರಾಜ
ಆರ್ಭಟಿಸಿದಾಗ ಸಿಡಿಲು ಬಂದೆರಗಿತು
ನಡುಗಿ ಹೋದಳು ಭೂಮಿ
ಇದರೊಂದಿಗೆ ಅವಳ ನಟನೆಯೂ ಕೊನೆಗೊಂಡಿತು

ಭೂಮಿಯ ಚುಂಬಿಸಿ ಮೇಘರಾಜನ
ಸಂದೇಶ ರವಾನಿಸಿತು ಮಳೆ
ಅವನೆಲ್ಲ ತನ್ನ ಒಡಲಾಳದಲ್ಲಿ
ಬೆಚ್ಚಗೆ ತುಂಬಿಸಿಕೊಂಡಳು ಇಳೆ

7 comments:

  1. ಯೋಚಿಸಿದಷ್ಟೂ ಅರ್ಥಭರಿತವಾದ ಕವನ!
    ಯೆಲ್ಲಿ೦ದ ಯೆಲ್ಲಿಗೆ ರೀ ಹೊಲಿಕೇ!!??

    ReplyDelete
  2. ಇಂದುಶ್ರಿ..
    ನಿಮ್ಮ ಇ ಕವನವನ್ನು ಸಂಪದ ನಲ್ಲಿ ನೋಡಿದ್ದೇ....ಅಲ್ಲಿಯೇ ಪ್ರತಿಕ್ರಿಯಿಸಿದ್ದೇನೆ... ಇನ್ನೊಮ್ಮೆ ಬೇಡ ಅಲ್ವ... :-)
    ನಿಮ್ಮ ಬ್ಲಾಗ್ ನ ಕೊಂಡಿಯನ್ನು ಅನುಸರಿಸಿ ನಿಮ್ಮ ಕವನಗಳ ಲೋಕಕ್ಕೆ ಬಂದೆ... ಪೂರ್ತ ನೋಡಲಿಲ್ಲ ನಿದಾನಕ್ಕೆ ನೋಡಿ ಪ್ರತಿಕ್ರಿಯಿಸುತ್ತೇನೆ...
    ಬಿಡುವಾದಾಗ ನನ್ನ ಬ್ಲಾಗಿನ ಲೋಕದ ಕಡೆ ಒಮ್ಮೆ ಬಂದು ಹೋಗಿ.......
    ಗುರು

    ReplyDelete
  3. ಇಂದುಶ್ರೀ ಮೇಡಮ್,

    ಗುರು ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಬಂದೆ...ಕವನ ಓದಿದೆ...
    ವಾಹ್! ಅನ್ನಬೇಕೆನಿಸಿತ್ತು...

    ಮಳೆ ಸುರಿಸುವ ಆಕಾಶ ಮತ್ತು ಅದನ್ನು ಪಡೆಯುವ ಧರೆಯ ಬಗ್ಗೆ ಎಂಥ ಕಲ್ಪನೆ...ಅವೆರಡರ ಕ್ರಿಯೆ ಮತ್ತು ಪ್ರತಿಕ್ರಿಯೆ ಕವನದಲ್ಲಿ ಹೊಸತು ಎನಿಸಿತು..
    ಕವನ ಇಷ್ಟವಾಯಿತು. ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ...
    ಬಿಡುವು ಮಾಡಿಕೊಂಡು ಉಳಿದ ಲೇಖನಗಳನ್ನು ಓದುತ್ತೇನೆ..
    ಬಿಡುವು ಮಾಡಿಕೊಂಡು ನನ್ನ ಛಾಯಾಕನ್ನಡಿ ಬ್ಲಾಗಿಗೆ ಬನ್ನಿ..

    ಧನ್ಯವಾದಗಳು.

    ReplyDelete
  4. ಖಂಡಿತ ಶಿವು ಅವರೆ...
    ನನ್ನನ್ನು ಮೇಡಮ್ ಅಂತ ಕರೆಯುವ ಅವಶ್ಯಕತೆ ಇಲ್ಲ...

    ReplyDelete
  5. @ ಗಣೇಶ ಭಟ್ಟ..
    ೨ನೇ ವರ್ಷ ಮುಗಿಯೋಕೆ ಇನ್ನು ೩ ಪ್ರಾಕ್ತಿಕಲ್ ಎಕ್ಸಾಮ್ ಮುಗಿಯಬೇಕು...

    ReplyDelete
  6. Indu avarae, naanu nimma thumba kavanagallanu hodidaenae...
    Nevu ee kavanagalanu pusthakada roopadalli
    prakatisabahudu yembhudu nanna hanisikae...
    kaarana ee kavanagallanu innustu kannadigaru hodi
    aananda padeyali yendu...idu nanna hanisikae.

    ReplyDelete