ಮರೆತ ಸ್ವರಗಳ ಮೊರೆತ
ಎದೆಯ ಸಾಗರದೊಳಗೆ
ಭಾವನೆಗಳ ಭೋರ್ಗರೆತ
ಮನದ ಕಡಲೊಳಗೆ
ಇನ್ನು ಬೇಸರಿಸಿ ಫಲವಿಲ್ಲ
ಕವಲುದಾರಿಯಲ್ಲಿ ನಿಂತಾಯ್ತು
ನೆನಪುಗಳಿಗಾಗಿ ಒದ್ದಾಡಿ ಸುಖವಿಲ್ಲ
ಪಯಣ ಮುಂದುವರೆಯಬೇಕು
ಎಲ್ಲರೆದುರು ಮಾತನಾಡಿದರೆಲ್ಲಿ
ಬಿಕ್ಕುವೆನೋ ಎಂಬ ಹಿಂಜರಿಕೆ
ನಾ ಹೇಳಬೇಕಾದ್ದೆಲ್ಲವ
ನನ್ನ ಮೌನವೇ ತಿಳಿಸಿತಲ್ಲವೇ?
ದೂರಾಗುವ ಕಾಲ ಬಂದಾಯ್ತು
ಸಮಯ ಕಾದೀತೇ ನಮಗಾಗಿ?
ಕಣ್ಣೆದುರಿಲ್ಲದಿದ್ದರೂ ಮನದಲ್ಲಿರಿ
ಕಾಡುವ ಸಿಹಿ ಸವಿ ನೆನಪಾಗಿ
ಕೊನೆಯ ಮಾತು: ಇದುವರೆಗೆ PESIT ಯಲ್ಲಿ ನನ್ನ ಜೊತೆಗಿದ್ದು ಮಧುರಾತಿಮಧುರ ನೆನಪುಗಳ ರಾಶಿಯನ್ನು ಒಟ್ಟುಗೂಡಿಸಿ ನೆನಪಿನ ಪುಟಗಳ ತುಂಬಾ ತುಂಬಿರುವ ನನ್ನೆಲ್ಲಾ ಸ್ನೇಹಿತರಿಗೆ....
ತುಂಬ ಚೆನ್ನಾಗಿದೆ ಮತ್ತು ಸ್ನೇಹಿತರನ್ನ ಬಿಟ್ಟು ಹೋಗುವಾಗ ಬೇಜಾರ್ ಆಗುತ್ತೆ
ReplyDeletenimma snehitara jothe kaleda kshanagaLu sadha hasiraagirali...
ReplyDeletechennagide kavan
ReplyDeletesavinenapugalannitta janarige vidaayada kavana chennaagide.
ReplyDeleteಎಲ್ಲರಿಗೂ ಧನ್ಯವಾದಗಳು.... :)
ReplyDeleteನಿಮ್ಮ ಕವನ ನೋಡಿ ನನಗೆ ಮುಖೇಶ್ ರ ಹಳೆಯ ಹಾಡು ನೆನಪಾಯ್ತು...
ReplyDeleteಹಮ್ ಛೋಡ್ ಚಲೇ ಹೈಂ ಮಹಫಿಲ್ ಕೊ ಯಾದ್ ಆಯೆ ಕಭಿ ತೊ ಮತ್ ರೋನಾ....
ಅಗಲಿಕೆಯ ಭಾವ ಅರ್ಥವತ್ತಾಗಿ ಮೂಡಿಸಿದ್ದೀರಿ ಕವನಿಸಿ...
ಈ 'ವಿದಾಯ' ಮತ್ತಷ್ಟು ಸ್ನೇಹಿತರನ್ನ ಹತ್ತಿರಗೊಳಿಸಲಿ - ಹಾರೈಕೆ.
ReplyDeleteಕೊನೆಯ ಮೆಟ್ಟಿಲೈನಲ್ಲಿ ನಿಂತಿರುವೆವು ಕೊನೆಯ ಭೇಟಿಯೂ ಏನು ??? ಬರಲಾರದ ದಾರಿ ನಾನಂತೂ ಹಿಡಿದಿಲ್ಲ ... ದುಂಡಾವರ್ತಿ ಭುವಿ... ನೆನಪು ಮುತ್ತುತ ಮರಳಿ.. ಬಾಲ್ಯ ನಗಲಿ ಎಂಬ ಮಿತ್ರನ ವಿದಾಯದ ಹಲವು ಬಿಡಿ ಸಾಲುಗಳು ನೆನಪಾದವು.
ReplyDelete